ಐಸಲೇ ಕುಮಾರವ್ಯಾಸ!!
ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿ ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳು ಒಂದು ಕಾಲದಲ್ಲಿ ಎಲ್ಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿದ್ದವು. ಆದರೆ ಈಗ ಓದುವವರು ಮಕ್ಕಳಿಗೆ ತಿಳಿಸಿ ಹೇಳುವವರು ಕಡಿಮೆಯಾದಂತೆ, ಭಾಷೆಯ, ಸಾಹಿತ್ಯದ ಸೊಬಗು ಮತ್ತು ಸತ್ವ ಮಕ್ಕಳಿಗೆ ಸಿಗುತ್ತಿಲ್ಲ. ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳನ್ನು ಅರಿತು ಎಲ್ಲರಿಗೂ ಹಂಚುವ ಉದ್ದೇಶ ಈ ಕಟ್ಟೆಯದು.
ನೀವೂ ಓದಿ ನಿಮ್ಮ ಆಸಕ್ತ ಗೆಳೆಯರಿಗೆ ತಲುಪಿಸಿದರೆ ನಮ್ಮ ಶ್ರಮ ಸಾರ್ಥಕ.
ಬನ್ನಿ, ಮೊದಲ ಷಟ್ಪದಿ ಇದು :
ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿ ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳು ಒಂದು ಕಾಲದಲ್ಲಿ ಎಲ್ಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿದ್ದವು. ಆದರೆ ಈಗ ಓದುವವರು ಮಕ್ಕಳಿಗೆ ತಿಳಿಸಿ ಹೇಳುವವರು ಕಡಿಮೆಯಾದಂತೆ, ಭಾಷೆಯ, ಸಾಹಿತ್ಯದ ಸೊಬಗು ಮತ್ತು ಸತ್ವ ಮಕ್ಕಳಿಗೆ ಸಿಗುತ್ತಿಲ್ಲ. ಕುಮಾರವ್ಯಾಸನ ಅದ್ಭುತ ಷಟ್ಪದಿ ಗಳನ್ನು ಅರಿತು ಎಲ್ಲರಿಗೂ ಹಂಚುವ ಉದ್ದೇಶ ಈ ಕಟ್ಟೆಯದು.
ನೀವೂ ಓದಿ ನಿಮ್ಮ ಆಸಕ್ತ ಗೆಳೆಯರಿಗೆ ತಲುಪಿಸಿದರೆ ನಮ್ಮ ಶ್ರಮ ಸಾರ್ಥಕ.
ಬನ್ನಿ, ಮೊದಲ ಷಟ್ಪದಿ ಇದು :
'ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಲ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತಧಾಮ ಸುಧಯಾ
ನಾಮ ಆಹವ ಭೀಮ ರಘುಕುಲ
ರಾಮ ರಕ್ಷಿಸು ಒಲಿದು ಗದುಗಿನ ವೀರ ನಾರಾಯಣ '
-ಕುಮಾರವ್ಯಾಸ ಕೃಷ್ಣನ ಪರಮ ಭಕ್ತ . ಮಹಾಭಾರತದ ಆರಂಭದ ಈ ಪದ್ಯದಲ್ಲಿ ಶ್ರೀರಾಮನನ್ನು ಪ್ರಾರ್ಥಿಸಿದ ರೀತಿ, ಭಾಷೆ ಸುಂದರವಾಗಿದೆ.
-ವಿಶೇಷ:ಶ್ರೀರಾಮನ ಗುಣಗಳಾದ ಆಹವ ಭೀಮ-ಯುದ್ದ ಭಯಂಕರ, ಸುಧಯಾನಾಮ- ನಾಮ ಜಪಿಸುವವರಿಗೆ ಅಮೃತ ಸಮಾನನಾದವನು ,ಅವನೇ ಗದುಗಿನ ವೀರ ನಾರಾಯಣನೂ ಹೌದು ಮೊದಲಾದ ಪ್ರಯೋಗ ಗಮನಿಸಿ'
(ಐಸಲೇ- ಕುಮಾರವ್ಯಾಸನಿಗೆಪ್ರಿಯವಾದ ಪ್ರಯೋಗ. ಅರ್ಥ-'ಹೌದಲ್ಲವೇ' ಗೆ ಹತ್ತಿರ.)
# ಕುಮಾರವ್ಯಾಸ ಪ್ರತಿಷ್ಠಾನ
೦೪/೦೮/೧೬
ತಾಮರಸ ಘನವಿಪುಲ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತಧಾಮ ಸುಧಯಾ
ನಾಮ ಆಹವ ಭೀಮ ರಘುಕುಲ
ರಾಮ ರಕ್ಷಿಸು ಒಲಿದು ಗದುಗಿನ ವೀರ ನಾರಾಯಣ '
-ಕುಮಾರವ್ಯಾಸ ಕೃಷ್ಣನ ಪರಮ ಭಕ್ತ . ಮಹಾಭಾರತದ ಆರಂಭದ ಈ ಪದ್ಯದಲ್ಲಿ ಶ್ರೀರಾಮನನ್ನು ಪ್ರಾರ್ಥಿಸಿದ ರೀತಿ, ಭಾಷೆ ಸುಂದರವಾಗಿದೆ.
-ವಿಶೇಷ:ಶ್ರೀರಾಮನ ಗುಣಗಳಾದ ಆಹವ ಭೀಮ-ಯುದ್ದ ಭಯಂಕರ, ಸುಧಯಾನಾಮ- ನಾಮ ಜಪಿಸುವವರಿಗೆ ಅಮೃತ ಸಮಾನನಾದವನು ,ಅವನೇ ಗದುಗಿನ ವೀರ ನಾರಾಯಣನೂ ಹೌದು ಮೊದಲಾದ ಪ್ರಯೋಗ ಗಮನಿಸಿ'
(ಐಸಲೇ- ಕುಮಾರವ್ಯಾಸನಿಗೆಪ್ರಿಯವಾದ ಪ್ರಯೋಗ. ಅರ್ಥ-'ಹೌದಲ್ಲವೇ' ಗೆ ಹತ್ತಿರ.)
# ಕುಮಾರವ್ಯಾಸ ಪ್ರತಿಷ್ಠಾನ
೦೪/೦೮/೧೬
No comments:
Post a Comment