Saturday, August 6, 2016

ಐಸಲೇ ಕುಮಾರವ್ಯಾಸ!! ೩
ಸಭಾಪರ್ವ-೧-೬೨
'ಅರಸು ರಾಕ್ಷಸ
ಮಂತ್ರಿ ಎಂಬವ ಮೊರೆವ ಹುಲಿ
ಪರಿವಾರ ಹದ್ದಿನ ನೆರವಿ
ಬಡವರ ಬಿನ್ನಪವ ಇನ್ನಾರು ಕೇಳುವರು?
ಉರಿವುತಿದೆ ದೇಶ,
ನಾವಿನ್ನಿರಲು ಬಾರದೆನುತ್ತ
ಜನ ಬೇಸರದ ಬೇಗೆಯಲಿರದಲೇ
ಭೂಪಾಲ ಕೇಳೆಂದ'

ಧರ್ಮರಾಯನ ಅರಮನೆಗೆ ಇದ್ದಕ್ಕಿದ್ದಂತೆ ಆಗಮಿಸಿದ ನಾರದರು ರಾಜ್ಯದ ಆಗುಹೋಗುಗಳ ಬಗ್ಗೆ ವಿಚಾರಿಸುತ್ತಾ, ನೀತಿಯನ್ನು ತಿಳಿಯಹೇಳುತ್ತಾ ಹೇಳುವ ಮಾತು ಇದು. ಆದರ್ಶವಿಲ್ಲದ ರಾಜನ ರಾಜ್ಯದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದಕ್ಕೆನಾರದರ ಬಾಯಲ್ಲಿ ಕವಿ ಅತ್ಯಂತ ಶಕ್ತಿಯುತವಾಗಿ ಹೇಳಿಸುತ್ತಾನೆ.
ಅರ್ಥ:- ರಾಜನೋ ಸಾಕ್ಷಾತ್ ರಾಕ್ಷಸನಂತೆ, ಮಂತ್ರಿಯಾವಾಗಲೂ ಘರ್ಜಿಸುವ ಹುಲಿಯ ಹಾಗೆ, ರಾಜನ ಪರಿವಾರದವರೋ ರಣಹದ್ದುಗಳಗುಂಪಿನಂತೆ , ಹಾಗಿರುವಾಗ ಬಡ ಪ್ರಜೆಗಳ ಗೋಳನ್ನು ಕೇಳುವವರ್ಯಾರು? ದೇಶ ಹತ್ತಿ ಉರಿಯುತ್ತಿದೆ ನಾವು ಇಲ್ಲಿರುವುದು ಬೇಡ ಎಂದು ನಿನ್ನ ರಾಜ್ಯದ ಜನತೆ ಬೇಸರದ ಬೆಂಕಿಯಲ್ಲಿ ಬೇಯುತ್ತಿಲ್ಲ ತಾನೇ?
ಸುಮಾರು ೬೦೦ ವರ್ಷಗಳ ಹಿಂದೆ ಕುಮಾರವ್ಯಾಸ ಬರೆದದ್ದು ಇಂದಿನ ಸಂದರ್ಭಕ್ಕೂಹಿಡಿದ ಕನ್ನಡಿಯಾಗಿರುವುದು ವಿಪರ್ಯಾಸವಲ್ಲವೇ?
#ಕುಮಾರವ್ಯಾಸ ಪ್ರತಿಷ್ಠಾನ
೦೬/೦೮/೨೦೧೬

No comments:

Post a Comment