Friday, August 5, 2016

ಐಸಲೇ ಕುಮಾರವ್ಯಾಸ!!
ಆರಂಭದ ಇನ್ನೊಂದು ಪ್ರಖ್ಯಾತ ಪದ್ಯ:
' ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನಮಗನ ತ
ಳೋದರಿಯಮಾತುಳನ ಮಾವನಂತುಳ ಭುಜಬಲದಿ
ಕಾಡಿ ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೋ ಗದುಗಿನ ವೀರ ನಾರಯಣ'

ಅರ್ಥ:-ವೇದ ಪುರುಷನ -ಬ್ರಹ್ಮನ, ಸುತನ-ಮಗನಾದ ಮರೀಚಿಯ,ಸುತನ-ಮಗನಾದ ಪೂರ್ಣಿಮನ, ಸಹೋದರನ-ಕಶ್ಯಪನ,ಹೆಮ್ಮಗನ-ಹಿರಿಯಮಗನಾದ ಇಂದ್ರನ, ಮಗನ-ಅರ್ಜುನನ,ತಳೋದರಿಯ-ಹೆಂಡತಿಯಾದ ಸುಭದ್ರೆಯ,ಮಾತುಳನ-ಸೋದರಮಾವನಾದ ಕಂಸನ, ಮಾವನ- ಜರಾಸಂದನ,ಕಾದಿ ಗೆಲಿದನ- ಹೋರಾಡಿ ಗೆದ್ದಂಥ ಭೀಮಸೇನನ,ಅಣ್ಣನ-ಧರ್ಮರಾಯನ, ಅವ್ವೆಯ-ತಾಯಿಯಾದ ಕುಂತಿಯ , ನಾದಿನಿಯ-ಕುಂತಿಯ ನಾದಿನಿಯಾದ ದೇವಕಿಯ ..ಹೊಟ್ಟೆಯಲ್ಲಿ ಜನಿಸಿದ ಅನಾದಿ ಮೂರ್ತಿಯಾದ ನಾರಯಣ, ನಮ್ಮನ್ನು ರಕ್ಷಿಸು.
ವಿಶೇಷ : ಪುರಾಣದ ಎಲ್ಲ ಪಾತ್ರಗಳಲ್ಲೂ ಸುತ್ತಾಡಿಸಿ ಸಂಬಂಧಗಳನ್ನು ಒಗಟಿನ ರೂಪದಲ್ಲಿ ಸೇರಿಸುತ್ತಾ ಕೊನೆಗೆ ಅವನ ಪ್ರಿಯದೈವ ನಾರಾಯಣನಿಗೆ ಜೋಡಿಸಿ ನಮಿಸುವಲ್ಲಿ ಕವಿಯ ಭಾಷೆಯ ಮೇಲಿನ ಹಿಡಿತ, ತಮಾಷೆಯ ಮನೋಭಾವ,ಪಾಂಡಿತ್ಯ ಎಷ್ಟುಪ್ರಭಾವಿಯಾಗಿದೆ!
ಕನ್ನಡದಲ್ಲಿ ತುಂಬಾ ಪ್ರಖ್ಯಾತ ಒಗಟು ಇದು. ಮಕ್ಕಳಿಗೆ ಹೇಳಿಕೊಡಿ.
ಕುಮಾರವ್ಯಾಸ ಪ್ರತಿಷ್ಠಾನ
೦೫/೦೮/೧೬

No comments:

Post a Comment