ಐಸಲೇ ಕುಮಾರವ್ಯಾಸ !! -೪೦-
ವಿರಾಟ ಪ ೬-೨೩
ರಥದಿಂದ ಇಳಿದು ಓಡಿದ ಉತ್ತರನನ್ನು ಅರ್ಜುನ ಬೆಂಬತ್ತಿ ನಾಲ್ಕೆಂಟು ಹೆಜ್ಜೆಯೊಳಗೆ ಹಿಡಿದ.
ಉತ್ತರ ಹಲ್ಲು ಕಿರಿದು ಬೇಡಿಕೊಂಡ; 'ಸಾರಥಿ, ದಯಮಾಡಿ ಬಿಟ್ಟು ಕಳಿಸು ,ನಿನ್ನ ಬಸಿರಿನಲ್ಲಿ ಪುನಃ ಹುಟ್ಟಿದೆ ಎಂದುಕೊಳ್ಳುತ್ತೇನೆ. ಈ ಸೈನ್ಯದೆದುರು ನಾನು ಕಾದುವುದುಂಟೆ? ಅನ್ಯರಿಂದ ಕೊಲ್ಲಿಸಬೇಡ. ಬೇಕಾದರೆ ಇದೋ,ಕಠಾರಿ! ನೀನೆ ಇರಿದು ಕೊಂದುಬಿಡು'
ಅರ್ಜುನ ನಕ್ಕ.'ಅಯ್ಯೋ ಹೇಡಿ, ನಾನು ನಪುಂಸಕ ಯುದ್ಧಕ್ಕೆ ,ಸಾವಿಗೆ ಅಂಜುತ್ತಿಲ್ಲ. ನೀನು ರಾಜನ ಮಗ. ಇರಿಯಲು ಅವಕಾಶ ಒದಗಿದಾಗ ಜೀವಗಳ್ಳನಂತೆ ಓಡಲು ನಾಚಿಕೆಯಾಗುವುದಿಲ್ಲವೇ?'
ಉತ್ತರನ ಉತ್ತರ ಸಿದ್ಧ: ನೀನು ವೀರ, ನಾನೇ ನಪುಂಸಕ; ಲೋಕದ ಜೀವಗಳ್ಳರಿಗೆ ನಾನೇ ಗುರು, ಆಯಿತೇನು? ಬಿಟ್ಟು ಕಳಿಸು'
ಅರ್ಜುನ ಸಂತೈಸಿದ.' ನೋಡು, ಯುದ್ಧದಲ್ಲಿ ಹಿಮ್ಮೆಟ್ಟಿ ಓಡಿದರೆ ಮಹಾ ಪಾತಕ. ಮುಂದಿಡುವ ಒಂದೊಂದು ಹೆಜ್ಜೆಗೂ ಅಶ್ವಮೇಧಯಾಗ ಮಾಡಿದ ಫಲ.ಸತ್ತರೆ ದೇವಲೋಕದ ಸ್ತ್ರೀಯರು ದಾಸಿಯರಾಗಿ ಸೇವೆ ಮಾಡುತ್ತಾರೆ.ಇಂದ್ರ ನೆಲಕ್ಕೆಹಾಸಿ ಸ್ವಾಗತಿಸುತ್ತಾನೆ. ವೀರಸ್ವರ್ಗ ಸಿಗುತ್ತದೆ.'
ಉತ್ತರನಿಗೆ ಯಾವುದೂ ಬೇಡ. ಫಲಾಯನವೊಂದರ ವಿನಾ,
'ಧುರದಲೋಡಿದ ಪಾತಕವ
ಭೂಸುರರು ಕಳೆದಪರು,
ಅಶ್ವಮೇಧವ ಧರಣಿಯಲಿ ಪ್ರತ್ಯಕ್ಷವಾಗಿಯೆ
ಮಾಡಬಹುದೆಮಗೆ,
ಸುರರ ಸತಿಯರನೊಲ್ಲೆವು
ಎಮಗೆಮ್ಮರಮನೆಯ ನಾರಿಯರೆ ಸಾಕು,
ಎಮ್ಮರಸುತನ ಎಮಗಿಂದ್ರ ಪದವಿಯು,
ಬಿಟ್ಟು ಕಳುಹೆಂದ..,'
'ಅಪ್ಪಾ, ಬೃಹನ್ನಳೆ, ಯುದ್ಧದಲ್ಲಿ ಬೆನ್ನು ತಿರುಗಿಸಿ ಓಡಿದ್ದಕ್ಕೆ ಬಂದ ಪಾಪ ಬರಲಿ; ಅದನ್ನು ಬ್ರಾಹ್ಮಣರ ಮೂಲಕ ಕಳೆದುಕೊಳ್ಳೋಣ. ಇನ್ನು ನಿನ್ನ ಅಶ್ವಮೇಧ! ಇಂದು ನಾನು ಬದುಕಿ ಉಳಿದರೆ ಪ್ರತ್ಯಕ್ಷವಾಗಿಯೇ ಮಾಡಬಹುದು. ನೀನು ಹೇಳುವ ದೇವಲೋಕದ ಸ್ತ್ರೀಯರು ನಮಗೆ ಬೇಡವೇ ಬೇಡ. ನಮ್ಮ ಅರಮನೆಯ ನಾರಿಯರೆ ಸಾಕು. ನಮ್ಮ ಅರಸುತನವೇ ನಮಗೆ ಇಂದ್ರ ಪದವಿ ಇದ್ದ ಹಾಗೆ. ಇದಕ್ಕಿಂತಾ ಹೆಚ್ಚು ನನಗೇನೂ ಬೇಕಿಲ್ಲ ದಯಮಾಡಿ ಬಿಟ್ಟು ಕಳಿಸು'
ಉತ್ತರನ ಮೂಲಕ ಕುಮಾರವ್ಯಾಸ ಆಡಿಸುವ ಒಂದೊಂದು ಮಾತೂ ನಗೆಯುಕ್ಕಿಸುತ್ತವೆ. ಕನ್ನಡ ಸಾಹಿತ್ಯದಲ್ಲಿನ ಉತ್ತಮ ಹಾಸ್ಯದ ಶ್ರೇಷ್ಠ ಉದಾಹರಣೆ ಈ ಪ್ರಸಂಗ.
ಕುಮಾರವ್ಯಾಸ ಪ್ರತಿಷ್ಠಾನ
೧೨/೧೦/೨೦೧೬
#
'
ವಿರಾಟ ಪ ೬-೨೩
ರಥದಿಂದ ಇಳಿದು ಓಡಿದ ಉತ್ತರನನ್ನು ಅರ್ಜುನ ಬೆಂಬತ್ತಿ ನಾಲ್ಕೆಂಟು ಹೆಜ್ಜೆಯೊಳಗೆ ಹಿಡಿದ.
ಉತ್ತರ ಹಲ್ಲು ಕಿರಿದು ಬೇಡಿಕೊಂಡ; 'ಸಾರಥಿ, ದಯಮಾಡಿ ಬಿಟ್ಟು ಕಳಿಸು ,ನಿನ್ನ ಬಸಿರಿನಲ್ಲಿ ಪುನಃ ಹುಟ್ಟಿದೆ ಎಂದುಕೊಳ್ಳುತ್ತೇನೆ. ಈ ಸೈನ್ಯದೆದುರು ನಾನು ಕಾದುವುದುಂಟೆ? ಅನ್ಯರಿಂದ ಕೊಲ್ಲಿಸಬೇಡ. ಬೇಕಾದರೆ ಇದೋ,ಕಠಾರಿ! ನೀನೆ ಇರಿದು ಕೊಂದುಬಿಡು'
ಅರ್ಜುನ ನಕ್ಕ.'ಅಯ್ಯೋ ಹೇಡಿ, ನಾನು ನಪುಂಸಕ ಯುದ್ಧಕ್ಕೆ ,ಸಾವಿಗೆ ಅಂಜುತ್ತಿಲ್ಲ. ನೀನು ರಾಜನ ಮಗ. ಇರಿಯಲು ಅವಕಾಶ ಒದಗಿದಾಗ ಜೀವಗಳ್ಳನಂತೆ ಓಡಲು ನಾಚಿಕೆಯಾಗುವುದಿಲ್ಲವೇ?'
ಉತ್ತರನ ಉತ್ತರ ಸಿದ್ಧ: ನೀನು ವೀರ, ನಾನೇ ನಪುಂಸಕ; ಲೋಕದ ಜೀವಗಳ್ಳರಿಗೆ ನಾನೇ ಗುರು, ಆಯಿತೇನು? ಬಿಟ್ಟು ಕಳಿಸು'
ಅರ್ಜುನ ಸಂತೈಸಿದ.' ನೋಡು, ಯುದ್ಧದಲ್ಲಿ ಹಿಮ್ಮೆಟ್ಟಿ ಓಡಿದರೆ ಮಹಾ ಪಾತಕ. ಮುಂದಿಡುವ ಒಂದೊಂದು ಹೆಜ್ಜೆಗೂ ಅಶ್ವಮೇಧಯಾಗ ಮಾಡಿದ ಫಲ.ಸತ್ತರೆ ದೇವಲೋಕದ ಸ್ತ್ರೀಯರು ದಾಸಿಯರಾಗಿ ಸೇವೆ ಮಾಡುತ್ತಾರೆ.ಇಂದ್ರ ನೆಲಕ್ಕೆಹಾಸಿ ಸ್ವಾಗತಿಸುತ್ತಾನೆ. ವೀರಸ್ವರ್ಗ ಸಿಗುತ್ತದೆ.'
ಉತ್ತರನಿಗೆ ಯಾವುದೂ ಬೇಡ. ಫಲಾಯನವೊಂದರ ವಿನಾ,
'ಧುರದಲೋಡಿದ ಪಾತಕವ
ಭೂಸುರರು ಕಳೆದಪರು,
ಅಶ್ವಮೇಧವ ಧರಣಿಯಲಿ ಪ್ರತ್ಯಕ್ಷವಾಗಿಯೆ
ಮಾಡಬಹುದೆಮಗೆ,
ಸುರರ ಸತಿಯರನೊಲ್ಲೆವು
ಎಮಗೆಮ್ಮರಮನೆಯ ನಾರಿಯರೆ ಸಾಕು,
ಎಮ್ಮರಸುತನ ಎಮಗಿಂದ್ರ ಪದವಿಯು,
ಬಿಟ್ಟು ಕಳುಹೆಂದ..,'
'ಅಪ್ಪಾ, ಬೃಹನ್ನಳೆ, ಯುದ್ಧದಲ್ಲಿ ಬೆನ್ನು ತಿರುಗಿಸಿ ಓಡಿದ್ದಕ್ಕೆ ಬಂದ ಪಾಪ ಬರಲಿ; ಅದನ್ನು ಬ್ರಾಹ್ಮಣರ ಮೂಲಕ ಕಳೆದುಕೊಳ್ಳೋಣ. ಇನ್ನು ನಿನ್ನ ಅಶ್ವಮೇಧ! ಇಂದು ನಾನು ಬದುಕಿ ಉಳಿದರೆ ಪ್ರತ್ಯಕ್ಷವಾಗಿಯೇ ಮಾಡಬಹುದು. ನೀನು ಹೇಳುವ ದೇವಲೋಕದ ಸ್ತ್ರೀಯರು ನಮಗೆ ಬೇಡವೇ ಬೇಡ. ನಮ್ಮ ಅರಮನೆಯ ನಾರಿಯರೆ ಸಾಕು. ನಮ್ಮ ಅರಸುತನವೇ ನಮಗೆ ಇಂದ್ರ ಪದವಿ ಇದ್ದ ಹಾಗೆ. ಇದಕ್ಕಿಂತಾ ಹೆಚ್ಚು ನನಗೇನೂ ಬೇಕಿಲ್ಲ ದಯಮಾಡಿ ಬಿಟ್ಟು ಕಳಿಸು'
ಉತ್ತರನ ಮೂಲಕ ಕುಮಾರವ್ಯಾಸ ಆಡಿಸುವ ಒಂದೊಂದು ಮಾತೂ ನಗೆಯುಕ್ಕಿಸುತ್ತವೆ. ಕನ್ನಡ ಸಾಹಿತ್ಯದಲ್ಲಿನ ಉತ್ತಮ ಹಾಸ್ಯದ ಶ್ರೇಷ್ಠ ಉದಾಹರಣೆ ಈ ಪ್ರಸಂಗ.
ಕುಮಾರವ್ಯಾಸ ಪ್ರತಿಷ್ಠಾನ
೧೨/೧೦/೨೦೧೬
#
'
No comments:
Post a Comment