ಐಸಲೇ ಕುಮಾರವ್ಯಾಸ !! -೩೯-
ವಿರಾಟ ಪ ೬-೧೨-೧೬
ರಥವನ್ನು ನಿಲ್ಲಿಸುವಂತೆ ಉತ್ತರ ಮಾಡಿಕೊಂಡ ಮನವಿ ವ್ಯರ್ಥವಾಯಿತು. ಇದೇನಿದು? ಸೈನ್ಯವನ್ನು ನೋಡಿ ನಾನು ನಡುಗುತ್ತಿದ್ದರೆ ಈ ನಪುಂಸಕ ಲೀಲಾಜಾಲವಾಗಿ ರಥವನ್ನು ಶತ್ರುಸೈನ್ಯದೆಡೆಗೆ ನುಗ್ಗಿಸುತ್ತಿದ್ದಾನೆ!
'ಏಕೆ ಸಾರಥಿ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ?..ನಿನಗೆ ವಿವೇಕ ಎಳ್ಳನಿತಿಲ್ಲ ತೇಜಿಗಳ ತಿರುಹು' ಎಂದ.
ಅರ್ಜುನ ಹೇಳಿದ; ಎಲೆ ಕುಮಾರಕ, ಮೊದಲ ಚುಂಬನದೊಳಗೆ ಹಲು ಬಿದ್ದಂತೆ ಕಾಳಗದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು( ಯುದ್ಧರಂಗಕ್ಕೆ ಹೋಗುವ ಮೊದಲೇ ಸಮರ ಭೀತಿಯಿಂದ ನಡುಗುತ್ತಿರುವೆ,) ನಿನ್ನ ತಂದೆಯ ವಂಶಕ್ಕೆ ಮಸಿ ಬಳಿಯಬೇಡ'
ಉತ್ತರನಿಗೆ ಯಾವ ನೀತಿಯೂ ತಾಗುತ್ತಿಲ್ಲ.'ಎಲೋ,ನಾನು ನಿನ್ನ ಒಡೆಯ ಆಜ್ಞೆ ಮಾಡುತ್ತಿದ್ದೇನೆ, ಇರಿಗಾರ ಸಾರಥಿ ( ಕೊಲೆಗಡುಕ), ರಥವನ್ನು ನಿಲ್ಲಿಸು'. ಅರ್ಜುನ ರಥವನ್ನು ಮತ್ತೂ ಮುಂದೂಡಿದ. ಉತ್ತರ ಮುಂದಿನ ಸಾಧನೆಗಾಗಿ ಸೆರಗು ಸರಿಪಡಿಸಿಕೊಂಡ;
'ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ...
ಮೃತ್ಯುವೋ ಸಾರಥಿಯೋ ಪಾಪಿಯ
ನೆತ್ತಣಿoದವೆ ಮಾಡಿಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ..''
'ಮೆಲ್ಲನೆ ರಥದ ಹಿಂದು ಹಿಂದಕ್ಕೆ ಬಂದು ಅರ್ಜುನನ ಕಣ್ತಪ್ಪಿಸಿ ರಥದಿಂದ ಹೊರಕ್ಕೆ ನೆಗೆದ. ಸಧ್ಯ, ಬದುಕಿದೆ, ಎಂದು ಕೆದರಿದ ತಲೆಯನ್ನೂ ಲೆಕ್ಕಿಸದೆ( ಹೇಡಿಗಳು, ಶರಣಾಗತರು ಮಾತ್ರ ಕೆದರಿದ ತಲೆಯಲ್ಲಿ ಇರುವವರು) ಬಂದ ದಿಕ್ಕಿನಲ್ಲಿ ವೇಗವಾಗಿ ಓಡತೊಡಗಿದ!
'ಇವನೇನು ಸಾರಥಿಯೋ ಅಥವಾ ಯಮನೋ? ಈ ಪಾಪಿಯನ್ನು ನಾನು ಯಾಕಾದರೂ ಸಾರಥಿಯಾಗಿ ಮಾಡಿಕೊಂಡೆನೋ ಎಂದು ಒಮ್ಮೆ ಹಿಂದಿರುಗಿ ನೋಡಿ, ಪುನಃ ಓಡಲಾರಂಭಿಸಿದ!
ಹೆದರಿದ ಪ್ರಾಣಿಗಳು ತಿರುತಿರುಗಿ ನೋಡಿಕೊಂಡು ಓಡುವ ಹಾಗೆ ಉತ್ತರಕುಮಾರ ಓಡಿ ಅರ್ಜುನನಿಗೇ ಏನು? ಶತ್ರು ಪಾಳೆಯದವರಿಗೂ ನಗೆಯುಕ್ಕಿಸಿದ.
ಹಾಸ್ಯದ ಜತೆಗೆ ಕವಿಯ ಮಾತುಗಾರಿಕೆಯ ಜಾನಪದ ಗುಣ ಸಹಾ ಮರೆಯಲಾರದ್ದು.
(*ಇಲ್ಲಿ ಉದಾಹರಿಸಿದ ಕುಮಾರವ್ಯಾಸನ ಪದ್ಯಗಳನ್ನು ತಪ್ಪದೇ ಓದಲು ಆಗ್ರಹ.ಯಾಕೆಂದರೆ ಪುಟಗಟ್ಟಲೆ ವ್ಯಾಖ್ಯಾನ ಬರೆದರೂ ಅವನ ಪದ್ಯಗಳ ಮೂಲ ಸೊಗಸನ್ನು ಹಿಡಿದಿಡಲು ಅಸಾಧ್ಯ.)
ಕುಮಾರವ್ಯಾಸ ಪ್ರತಿಷ್ಠಾನ
೭/೧೦/೨೦೧೬
#
ವಿರಾಟ ಪ ೬-೧೨-೧೬
ರಥವನ್ನು ನಿಲ್ಲಿಸುವಂತೆ ಉತ್ತರ ಮಾಡಿಕೊಂಡ ಮನವಿ ವ್ಯರ್ಥವಾಯಿತು. ಇದೇನಿದು? ಸೈನ್ಯವನ್ನು ನೋಡಿ ನಾನು ನಡುಗುತ್ತಿದ್ದರೆ ಈ ನಪುಂಸಕ ಲೀಲಾಜಾಲವಾಗಿ ರಥವನ್ನು ಶತ್ರುಸೈನ್ಯದೆಡೆಗೆ ನುಗ್ಗಿಸುತ್ತಿದ್ದಾನೆ!
'ಏಕೆ ಸಾರಥಿ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ?..ನಿನಗೆ ವಿವೇಕ ಎಳ್ಳನಿತಿಲ್ಲ ತೇಜಿಗಳ ತಿರುಹು' ಎಂದ.
ಅರ್ಜುನ ಹೇಳಿದ; ಎಲೆ ಕುಮಾರಕ, ಮೊದಲ ಚುಂಬನದೊಳಗೆ ಹಲು ಬಿದ್ದಂತೆ ಕಾಳಗದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು( ಯುದ್ಧರಂಗಕ್ಕೆ ಹೋಗುವ ಮೊದಲೇ ಸಮರ ಭೀತಿಯಿಂದ ನಡುಗುತ್ತಿರುವೆ,) ನಿನ್ನ ತಂದೆಯ ವಂಶಕ್ಕೆ ಮಸಿ ಬಳಿಯಬೇಡ'
ಉತ್ತರನಿಗೆ ಯಾವ ನೀತಿಯೂ ತಾಗುತ್ತಿಲ್ಲ.'ಎಲೋ,ನಾನು ನಿನ್ನ ಒಡೆಯ ಆಜ್ಞೆ ಮಾಡುತ್ತಿದ್ದೇನೆ, ಇರಿಗಾರ ಸಾರಥಿ ( ಕೊಲೆಗಡುಕ), ರಥವನ್ನು ನಿಲ್ಲಿಸು'. ಅರ್ಜುನ ರಥವನ್ನು ಮತ್ತೂ ಮುಂದೂಡಿದ. ಉತ್ತರ ಮುಂದಿನ ಸಾಧನೆಗಾಗಿ ಸೆರಗು ಸರಿಪಡಿಸಿಕೊಂಡ;
'ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ...
ಮೃತ್ಯುವೋ ಸಾರಥಿಯೋ ಪಾಪಿಯ
ನೆತ್ತಣಿoದವೆ ಮಾಡಿಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ..''
'ಮೆಲ್ಲನೆ ರಥದ ಹಿಂದು ಹಿಂದಕ್ಕೆ ಬಂದು ಅರ್ಜುನನ ಕಣ್ತಪ್ಪಿಸಿ ರಥದಿಂದ ಹೊರಕ್ಕೆ ನೆಗೆದ. ಸಧ್ಯ, ಬದುಕಿದೆ, ಎಂದು ಕೆದರಿದ ತಲೆಯನ್ನೂ ಲೆಕ್ಕಿಸದೆ( ಹೇಡಿಗಳು, ಶರಣಾಗತರು ಮಾತ್ರ ಕೆದರಿದ ತಲೆಯಲ್ಲಿ ಇರುವವರು) ಬಂದ ದಿಕ್ಕಿನಲ್ಲಿ ವೇಗವಾಗಿ ಓಡತೊಡಗಿದ!
'ಇವನೇನು ಸಾರಥಿಯೋ ಅಥವಾ ಯಮನೋ? ಈ ಪಾಪಿಯನ್ನು ನಾನು ಯಾಕಾದರೂ ಸಾರಥಿಯಾಗಿ ಮಾಡಿಕೊಂಡೆನೋ ಎಂದು ಒಮ್ಮೆ ಹಿಂದಿರುಗಿ ನೋಡಿ, ಪುನಃ ಓಡಲಾರಂಭಿಸಿದ!
ಹೆದರಿದ ಪ್ರಾಣಿಗಳು ತಿರುತಿರುಗಿ ನೋಡಿಕೊಂಡು ಓಡುವ ಹಾಗೆ ಉತ್ತರಕುಮಾರ ಓಡಿ ಅರ್ಜುನನಿಗೇ ಏನು? ಶತ್ರು ಪಾಳೆಯದವರಿಗೂ ನಗೆಯುಕ್ಕಿಸಿದ.
ಹಾಸ್ಯದ ಜತೆಗೆ ಕವಿಯ ಮಾತುಗಾರಿಕೆಯ ಜಾನಪದ ಗುಣ ಸಹಾ ಮರೆಯಲಾರದ್ದು.
(*ಇಲ್ಲಿ ಉದಾಹರಿಸಿದ ಕುಮಾರವ್ಯಾಸನ ಪದ್ಯಗಳನ್ನು ತಪ್ಪದೇ ಓದಲು ಆಗ್ರಹ.ಯಾಕೆಂದರೆ ಪುಟಗಟ್ಟಲೆ ವ್ಯಾಖ್ಯಾನ ಬರೆದರೂ ಅವನ ಪದ್ಯಗಳ ಮೂಲ ಸೊಗಸನ್ನು ಹಿಡಿದಿಡಲು ಅಸಾಧ್ಯ.)
ಕುಮಾರವ್ಯಾಸ ಪ್ರತಿಷ್ಠಾನ
೭/೧೦/೨೦೧೬
#
No comments:
Post a Comment