Saturday, October 1, 2016

ಐಸಲೇ ಕುಮಾರವ್ಯಾಸ -೩೬-

ವಿರಾಟ ಪ ೫-೨೨

'ಕುಣಿಸಿ ನಗನೇ...'

'ಉತ್ತರನ ಪೌರುಷ' ಎಂದೇ ಪ್ರಸಿದ್ಧವಾದ ವಿರಾಟ ಪರ್ವದ ಭಾಗದಲ್ಲಿ ಶ್ರೇಷ್ಠ ಮಾತುಗಾರನಾದ ಕುಮಾರವ್ಯಾಸನಿಗೆ ಅಗಾಧ ಅವಕಾಶ!

'ಖಳನ ಮುರಿವೆನು,
ಹಸ್ತಿನಾಪುರದೊಳಗೆ ಥಾಣಾoತರವನಿಕ್ಕುವೆ,
ತೊಲಗಿಸುವೆ ಕೌರವನ ಸೇನೆಯ
ಧೂಳಿಪಟ ಮಾಡಿ,
ಗೆಲವ ತಹೆನೆಂದು
ಉತ್ತರನು ಕೋಮಲೆಯರಿದಿರಲಿ
ಬಾಯ್ಗೆ ಬಂದುದ ಗಳಹುತಿದ್ದನು
ಬೇಕು ಬೇಡೆಂಬವರ ನಾ ಕಾಣೆ'

'ಖಳ ದುರ್ಯೋಧನನನ್ನು ಭಂಗಿಸುತ್ತೇನೆ;ಹಸ್ತಿನಾಪುರ ನನ್ನ ಅಧೀನ  ದೇಶವಾಗಲಿದೆ; ಕೌರವನ ಸೇನೆಯನ್ನು ಧೂಳೀಪಟ ಮಾಡುತ್ತೇನೆ; ನಮ್ಮ ಗೆಲುವು ನಿಶ್ಚಿತ 'ಎಂದು ಕೋಮಲವಾದ ಹೆಂಗಸರೆದುರು ಬಾಯಿಗೆ ಬಂದದ್ದನ್ನು ಒದರುತ್ತಿದ್ದ; ಕವಿ ಹೇಳುತ್ತಾನೆ- ಯಾರಿಗೆ ಬೇಕೋ, ಯಾರಿಗೆ ಬೇಡವೋ ಗೊತ್ತಿಲ್ಲ, ಅಂತೂ ಕುಮಾರನ ಸ್ವಪ್ರಶಂಸೆ ಸಾಗಿತ್ತು.

ಅಭಿಮನ್ಯುವಿನ 'ಬವರವಾದರೆ ಹರನ ವದನಕೆ ಬೆವರ ತಹೆನು' ಎಂಬ ಎಚ್ಚರಿಕೆಯ ಆತ್ಮ ವಿಶ್ವಾಸಕ್ಕೂ ಬಾಯಿಗೆ ಬಂದುದನ್ನು ಗಳಹುವ ಉತ್ತರನ ಮಾತುಗಳಿಗೂ ಇರುವ ವ್ಯತ್ಯಾಸವನ್ನು ಕುಮಾರವ್ಯಾಸ ಹೇಗೆ ತೋರಿಸಿದ್ದಾನೆ!

ಕುಮಾರವ್ಯಾಸ ಪ್ರತಿಷ್ಠಾನ
೦೧/೧೦/೨೦೧೬

#

1 comment:

  1. ಉತ್ತರನ ಪೌರುಷ ಒಲೆಯ ಮುಂದೆ ಎನ್ನುವ ಉತ್ತಮ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು ಸರ್

    ReplyDelete